Ishwarachandra B G

  • Weekly wrap: ಸೌದಿಯಲ್ಲಿ ಮೋದಿ ಚಿನ್ನದ ಪ್ರತಿಮೆ, ಭಾರತಕ್ಕೆ ಪ್ರಯಾಣ ವೇಳೆ ಎಚ್ಚರಿಕೆಗೆ ಕೆನಡಾ ಸೂಚನೆ ವಾರದ ಕ್ಲೇಮ್‌ ನೋಟ

    Weekly wrap: ಸೌದಿಯಲ್ಲಿ ಮೋದಿ ಚಿನ್ನದ ಪ್ರತಿಮೆ, ಭಾರತಕ್ಕೆ ಪ್ರಯಾಣ ವೇಳೆ ಎಚ್ಚರಿಕೆಗೆ ಕೆನಡಾ ಸೂಚನೆ ವಾರದ ಕ್ಲೇಮ್‌ ನೋಟ

    ಸೌದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪ್ರತಿಮೆ ತಯಾರು ಮಾಡಲಾಗಿದೆ, ಖಲಿಸ್ತಾನ ವಿವಾದ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಹಗ್ಗಜಗ್ಗಾಟ ಭಾರತ-ಕೆನಡಾ ಮಧ್ಯೆ ನಡೆದಿರುವಂತೆಯೇ, ಭಾರತಕ್ಕೆ ಪ್ರಯಾಣಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಕೆನಡಾ ಸೂಚನೆ, ಮುಳುಗಿ ಮೃತನಾದ ವ್ಯಕ್ತಿಯನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಜೀವಂತವಾಗುತ್ತಾನೆ, ತೆಲಂಗಾಣ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆ, ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ, ಹುಟ್ಟುವ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಕ್ಲೇಮುಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆಯನ್ನು ನಡೆಸಿದ್ದು ಸತ್ಯಾಸತ್ಯತೆಯನ್ನು ತೆರೆದಿಟ್ಟಿದೆ. ಭಾರತಕ್ಕೆ…

  • Fact Check: ಕೆನಡಾದಲ್ಲಿ ಆರೆಸ್ಸೆಸ್ ನಿಷೇಧ? ವೈರಲ್ ಹೇಳಿಕೆ ಸತ್ಯವೇ?

    Fact Check: ಕೆನಡಾದಲ್ಲಿ ಆರೆಸ್ಸೆಸ್ ನಿಷೇಧ? ವೈರಲ್ ಹೇಳಿಕೆ ಸತ್ಯವೇ?

    Claimಕೆನಡಾದಲ್ಲಿ ಆರೆಸ್ಸೆಸ್‌ ನಿಷೇಧ Factಕೆನಡಾದಲ್ಲಿ ಆರೆಸ್ಸೆಸ್‌ ನಿಷೇಧವಾಗಿಲ್ಲ. ಕೆನಡಾ ಸರ್ಕಾರ ಅಂತಹ ಯಾವುದೇ ಆದೇಶ ನೀಡಿಲ್ಲ ಇತ್ತೀಚಿನ ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ, ಒಂದು ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. “ಕೆನಡಾ ಸರ್ಕಾರವು ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸ್ಸೆಸ್ಸ್) ನಿಷೇಧಿಸಿದೆ ಮತ್ತು ಅದರ ಕಾರ್ಯಕರ್ತರನ್ನು ತಕ್ಷಣವೇ ದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ” ಎಂದು ವೈರಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆನಡಾದಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸುವುದು ಸೇರಿದಂತೆ ಇತರ ಮೂರು ಬೇಡಿಕೆಗಳನ್ನು ವ್ಯಕ್ತಿಯೊಬ್ಬರು ಮುಂದಿಟ್ಟಿರುವ ವೀಡಿಯೋದೊಂದಿಗೆ…

  • Fact Check: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

    Fact Check: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

    Claim ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಅದನ್ನು ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ಉದ್ಘಾಟಿಸಿದ್ದಾರೆ. ಹಿಂದೂಗಳ ಮೂರ್ಖರಾದ ಪರಿಣಾಮ ಇದು ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ತೆಲಂಗಾಣ ವಿಧಾನಸೌಧದಲ್ಲಿ ನಿರ್ಮಿಸಲಾಗಿರುವ ನೂತನ ಬೃಹತ್ ಮಸೀದಿಯನ್ನು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ನೋಡಿ ಹಿಂದುಗಳೇ ಮೂರ್ಖರಾಗಿ ಮತ ಚಲಾಯಿಸಿದ ಪರಿಣಾಮವಿದು. ವಿವೇಚನೆ ಇಲ್ಲದೆ ಮತ ನೀಡಿದರೆ ಮುಂದೊಂದು ದಿನ ನಿಲ್ಲಲು ನೆಲೆ ಇಲ್ಲದಂತಾದೀತು.” ಎಂದು ಹೇಳಲಾಗಿದೆ. Also…

  • Fact Check: ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ ಎಂಬ ಎಎನ್‌ಐ ವರದಿ ನಿಜವೇ?

    Fact Check: ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ ಎಂಬ ಎಎನ್‌ಐ ವರದಿ ನಿಜವೇ?

    Claimರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ‘ಊಹಿಸಲಾಗದ ಪರಿಸ್ಥಿತಿ’ಯಿರುವ ಬಗ್ಗೆ ಅದು ತನ್ನಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. Factಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸುವ ಪ್ರಜೆಗಳಿಗೆ ನೀಡಿರುವ ಸಲಹೆ ಹೊಸಲದಲ್ಲ. ಅದು 2021ರಿಂದ ಬದಲಾವಣೆಯಾಗದೆ ಉಳಿದಿದೆ ಎಂದು ದಿಲ್ಲಿಯಲ್ಲಿರುವ ಕೆನಡಾ ಹೈಕಮಿಷನ್‌ ಸ್ಪಷ್ಟಪಡಿಸಿದೆ. ಕೆನಡಾದ ಪ್ರಜೆ, ಖಲಿಸ್ತಾನಿ ಉಹ್ರ ಹರ್ದೀಪ್‌ ಸಿಂಗ್‌ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ “ಆರೋಪ”ಗಳನ್ನು ಉಲ್ಲೇಖಿಸಿ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಹೇಳಿಕೆ…

  • Fact Check: ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎನ್ನುವುದು ಸತ್ಯವೇ?

    Fact Check: ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎನ್ನುವುದು ಸತ್ಯವೇ?

    Claim ನೀರಿನಲ್ಲಿ ಮುಳುಗಿ ವ್ಯಕ್ತಿ ಸತ್ತರೆ, ಬಳಿಕ ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಜೀವಂತವಾಗುತ್ತಾನೆ Fact ಮುಳುಗಿ ಸತ್ತವರ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಮತ್ತೆ ವ್ಯಕ್ತಿ ಜೀವಂತವಾಗುತ್ತಾನೆ ಎನ್ನುವುದು ಸಂಪೂರ್ಣ ಸುಳ್ಳಾಗಿದೆ ಉಪ್ಪಿನ ರಾಶಿಯಲ್ಲಿ ಮೃತ ದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾವು ಅವನ ಜೀವವನ್ನು ಮರಳಿ ತರಲು ಸಾಧ್ಯವಿದೆ….…

  • Fact Check: ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆ ಸೌದಿಯಲ್ಲಿ ಕೆತ್ತಲಾಗಿದೆ ಎನ್ನುವುದು ನಿಜವೇ?

    Fact Check: ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆ ಸೌದಿಯಲ್ಲಿ ಕೆತ್ತಲಾಗಿದೆ ಎನ್ನುವುದು ನಿಜವೇ?

    Claimಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ಕೆತ್ತಲಾಗಿದೆ Factಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ಸೌದಿಯಲ್ಲಿಡಲಾಗಿಲ್ಲ. ಇದನ್ನು ಸೂರತ್ ಆಭರಣ ವ್ಯಾಪಾರಿಯೊಬ್ಬರು 2022ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ 156 ಸ್ಥಾನದಲ್ಲಿ ಗೆದ್ದ ನಿಮಿತ್ತ ಕೆತ್ತಿಸಿದ್ದಾರೆ ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಸಾರ ಮಾಡುತ್ತಿದ್ದಾರೆ, ಇದು ಸೌದಿ ಅರೇಬಿಯಾದಲ್ಲಿ ಕೆತ್ತಿಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ನವದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಸೌದಿ ಅರೇಬಿಯಾದ ಯುವರಾಜ…

  • Weekly wrap: ಡ್ರಗ್ಸ್‌ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್‌ ಕಾಲೇಜಿನಲ್ಲಿ ಚಲಿಸಿದ ಏಣಿ, ವಾರದ ಕ್ಲೇಮ್ ನೋಟ

    Weekly wrap: ಡ್ರಗ್ಸ್‌ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್‌ ಕಾಲೇಜಿನಲ್ಲಿ ಚಲಿಸಿದ ಏಣಿ, ವಾರದ ಕ್ಲೇಮ್ ನೋಟ

    ಡ್ರಗ್ಸ್‌ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್‌ ಕಾಲೇಜಿನಲ್ಲಿ ಚಲಿಸಿದ ಏಣಿ, ಬೆಂಗಳೂರಲ್ಲಿ ಮಳೆನೀರಲ್ಲಿ ಜಾರಿದ ವಿಮಾನ, ಕಲ್ಲುಸಕ್ಕರೆ-ಕಾಮಕಸ್ತೂರಿ ಸೇರಿಸಿ ಕುಡಿದರೆ ಪೈಲ್ಸ್ ಗುಣಮುಖ ಎಂಬ ಕ್ಲೇಮ್‌ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನ್ಯೂಸ್‌ಚೆಕರ್‌ ಇವುಗಳ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಎಂದು ಕಂಡುಬಂದಿದೆ. ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು? ಮಂಗಳೂರಿನಲ್ಲಿ ಡ್ರಗ್ಸ್‌ ಸೇವಿಸಿದ್ದಾಳೆ ಎನ್ನಲಾದ ಯುವತಿಯೊಬ್ಬಳು ಪೊಲೀಸರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ. ಸತ್ಯಶೋಧನೆ ವೇಳೆ…

  • ಸ್ವಾವಲಂಬಿ ಸಾರಥಿ ಯೋಜನೆ ವಿವಾದ; ನಿಜಾಂಶ ಏನು?

    ಸ್ವಾವಲಂಬಿ ಸಾರಥಿ ಯೋಜನೆ ವಿವಾದ; ನಿಜಾಂಶ ಏನು?

    ಸ್ವಾವಲಂಬಿ ಸಾರಥಿ ಯೋಜನೆ ಕುರಿತ ವಿವಾದವೊಂದು ಈಗ ಭುಗಿಲೆದ್ದಿದೆ. ಕರ್ನಾಟದಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯ ಅನ್ವಯ, ಅವರಿಗೆ ಮಾತ್ರ ಸೀಮಿತವಾಗುವಂತೆ ವಾಹನಗಳನ್ನು ತೆಗೆಯಲು ಅನುಕೂಲ ಮಾಡಿಕೊಡುವ ಸಬ್ಸಿಡಿ ಯೋಜನೆಯೊಂದನ್ನು ಹೊರತಂದಿದೆ ಎಂಬುದು ಈ ಆರೋಪ. ಈ ಕುರಿತು ಆಜ್‌ತಕ್‌ ಟಿವಿ ವಾಹನಿಯಲ್ಲಿ ಆಂಕರ್ ಸುಧೀರ್ ಚೌಧರಿ ಅಭಿಪ್ರಾಯವನ್ನು ಹೇಳಿದ್ದು, ಈ ಕುರಿತು ಅವರ ಮತ್ತು ವಾಹಿನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜೊತೆಗೆ ಯೋಜನೆ ಕುರಿತು ಸಾಮಾಜಿಕ…

  • Fact Check: ಬೆಂಗಳೂರಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ?

    Fact Check: ಬೆಂಗಳೂರಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ?

    Claim ಬೆಂಗಳೂರಿನಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ Factವಿಮಾನ ಮಳೆ ನೀರಿನಿಂದಾಗಿ ಮಗುಚಿದ್ದಲ್ಲ, ಮುಂಭಾಗದ ಲ್ಯಾಂಡಿಂಗ್‌ ಗಿಯರ್ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದ್ದು ಈ ವೇಳೆ ಬೆಂಕಿ ಅವಘಡ ತಪ್ಪಿಸಲು ಅಗ್ನಿನಿರೋಧಕ ಫೋಮ್ ಬಳಕೆ ಮಾಡಲಾಗಿದೆ ಮಳೆ ನೀರಿನಲ್ಲಿ ಮಗುಚಿ ಬಿದ್ದ ವಿಮಾನ ಎಂದು ವೀಡಿಯೋವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ ನಲ್ಲಿ ಕಂಡುಬಂದ ಈ ರೀಲ್‌ನಲ್ಲಿ “ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ, ಬೆಂಗಳೂರು ಎಚ್‌ಎಎಲ್” ಎಂದು ಬರೆಯಲಾಗಿದೆ. ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು…

  • Fact Check: ಮೆಡಿಕಲ್‌ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?

    Fact Check: ಮೆಡಿಕಲ್‌ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?

    Claimಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ತಾನಾಗಿಯೇ ಚಲಿಸಿದ ಬಿದಿರಿನ ಏಣಿ Factಬಿದಿರಿನ ಏಣಿ ತಾನಾಗಿಯೇ ಚಲಿಸಿದ್ದರ ಹಿಂದೆ ವೈಜ್ಞಾನಿಕ ಕಾರಣವಿದೆ. ಜೊತೆಗೆ ಇದು ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ ಮೆಡಿಕಲ್‌ ಕಾಲೇಜಿನ ಪೋಸ್ಟ್ ಮಾರ್ಟಂ ವಿಭಾಗದಲ್ಲಿ ಚಲಿಸಿದ ಏಣಿ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಕುರಿತು ವಾಟ್ಸಾಪ್‌ ನಲ್ಲಿ ಕಂಡುಬಂದ ಸಂದೇಶವೊಂದರಲ್ಲಿ, “ಉತ್ತರ ಪ್ರದೇಶದ ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್…