Ishwarachandra B G
-

Fact Check: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?
Claimಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಪುಂಡರು, ದರೋಡೆಕೋರರು ತಿರುಗಾಡುತ್ತಿದ್ದಾರೆ, ರಾತ್ರಿ ಸಂಚಾರ ಅಪಾಯಕಾರಿ Factಎಕ್ಸ್ ಪ್ರೆಸ್ ವೇಯಲ್ಲಿ ರಾತ್ರಿ ಸಂಚಾರ ಅಪಾಯಕಾರಿ ಎನ್ನುವುದು ಸುಳ್ಳು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ವೇನಲ್ಲಿ ಪುಂಡರು, ದರೋಡೆಕೋರರು ತಿರುಗಾಡುತ್ತಿದ್ದಾರೆ. ಈ ಹೈವೇ ಈಗ ಅಪಾಯಕಾರಿ, ರಾತ್ರಿ ಇಲ್ಲಿ ಬರುವುದು ಡೇಂಜರ್ ಎಂಬಂತೆ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಫೇಸ್ಬುಕ್ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬೆಂಗಳೂರಿಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಬರುವವರು ಯಾವುದೇ ಸಂದರ್ಭದಲ್ಲೂ…
-

Fact Check: ಎಂಟಿಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎನ್ನುವ ಹೇಳಿಕೆ ಸತ್ಯವೇ?
Claim ಎಂಟಿಆರ್ ಕಂಪೆನಿ ಈಗ ಈಸ್ಟರ್ನ್ ಮಸಾಲಾ ತೆಕ್ಕೆಗೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ನಲ್ಲಿ ಕಂಡುಬಂದ ಈ ಸಂದೇಶದಲ್ಲಿ “ಮಯ್ಯರ ಕುಟುಂಬದಿಂದ ವಿದೇಶಿ ಕಂಪನಿ ಪಾಲಾಗಿದ್ದ ಎಂ.ಟಿ.ಆರ್. ಈಗ ಜಿಹಾದಿಗಳ ಈಸ್ಟರ್ನ್ ಮಸಾಲೆ ತೆಕ್ಕೆಗೆ” ಎಂದು ಹೇಳಲಾಗಿದೆ. ಈ ಕುರಿತಂತೆ ಸತ್ಯಶೋಧನೆಗೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್(+91 9999499044)ಗೆ ದೂರು ಬಂದಿದ್ದು, ಅದನ್ನು ಸ್ವೀಕರಿಸಲಾಗಿದೆ. Also Read: ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ ಎನ್ನುವುದು ನಿಜವೇ? Fact ಸತ್ಯಶೋಧನೆಗಾಗಿ ನಾವು ಗೂಗಲ್…
-

Fact Check: ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ ಎನ್ನುವುದು ನಿಜವೇ?
Claim ಮುಸ್ಲಿಂ ಮತೀಯವಾದಿಗಳು ದೇಶದ ತ್ರಿವರ್ಣ ಧ್ವಜವನ್ನು ತಿರುಚಿ ಇಸ್ಲಾಂ ಚಿಹ್ನೆಯನ್ನು ಹಾಕಿ ಕೋಲ್ಕತಾದ ಹೌರಾ ಸೇತುವೆಯಲ್ಲಿ ಹಾರಾಡಿಸಿದ್ದಾರೆ ಎಂಬ ಕ್ಲೇಮ್ ಒಂದು ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆಯನ್ನು ತಿಳಿಯಲು ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ (+91 9999499044)ಗೆ ದೂರನ್ನು ಕಳಿಸಿದ್ದು, ಸತ್ಯಶೋಧನೆಗಾಗಿ ನಾವು ಅದನ್ನು ಸ್ವೀಕರಿಸಿದ್ದೇವೆ. Also Read: ಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ಎಂದು ತಪ್ಪಾದ ಫೋಟೋ ಹಂಚಿಕೆ ಇದೇ ರೀತಿಯ ಕ್ಲೇಮ್ ಇರುವ ಟ್ವೀಟ್ ಇಲ್ಲಿದೆ. ಇದೇ ರೀತಿಯ ಕ್ಲೇಮ್ ಇರುವ…
-

Fact check: ಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ಎಂದು ತಪ್ಪಾದ ಫೋಟೋ ಹಂಚಿಕೆ
Claimಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ನಡೆಸಲಾಗಿದೆ Factವೈರಲ್ ಚಿತ್ರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಇದು “ಚಿನ್-ಕುಕಿ ನಾರ್ಕೋ ಭಯೋತ್ಪಾದನೆ” ವಿರುದ್ಧ ಪ್ರತಿಭಟಿಸಿದ ಇನ್ನೊಂದು ರಾಲಿಯದ್ದು ” ಕುಕಿ ಮಹಿಳೆಯನ್ನು ಬೆತ್ತಲಾಗಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸುವುದರ ವಿರುದ್ಧ ಮೈತೇಯಿ ಹಿಂದೂಗಳು ಪ್ರತಿಭಟನಾ ರಾಲಿ ನಡೆಸುತ್ತಿದ್ದಾರೆ” ಎಂದು ಹೇಳಿಕೊಂಡು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ಯಾನರ್ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಬೃಹತ್ ಜನಸಮೂಹದ ಚಿತ್ರವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. Also Read: ಟೇಬಲ್…
-

Fact Check: ಕ್ಯಾಪ್ಸಿಕಂನಲ್ಲಿ ಪ್ರಪಂಚದ ಅತಿ ಚಿಕ್ಕ ವಿಷಕಾರಿ ಹಾವು, ವೈರಲ್ ವೀಡಿಯೋ ಸತ್ಯವೇ?
Claimಕ್ಯಾಪ್ಸಿಕಂನಲ್ಲಿ ಪ್ರಪಂಚದ ಅತಿ ಚಿಕ್ಕ ವಿಷಕಾರಿ ಹಾವು ಪತ್ತೆ. ವಿಡಿಯೋ ವೈರಲ್ Factಕ್ಯಾಪ್ಸಿಕಂನಲ್ಲಿ ಕಂಡುಬಂದಿರುವುದು ಹಾವಲ್ಲ ಒಂದು ರೀತಿಯ ಹುಳ. ಈ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದು ಕ್ಯಾಪ್ಸಿಕಂನಲ್ಲಿ ವಿಶ್ವದ ಅತ್ಯಂತ ಚಿಕ್ಕ ವಿಷಕಾರಿ ಹಾವು ಕಂಡುಬಂದಿದೆ. ಕ್ಯಾಪ್ಸಿಕಂಗಳನ್ನು ಬಳಸುವ ವೇಳೆ ಎಚ್ಚರಿಕೆ ವಹಿಸಬೇಕಾಗಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ವೀಡಿಯೋ ಜೊತೆಗಿರುವ ಹೇಳಿಕೆಯೊಂದರಲ್ಲಿ “ಪ್ರಪಂಚದ ಅತ್ಯಂತ ಚಿಕ್ಕ ವಿಷಕಾರಿ ಹಾವು ಪತ್ತೆ. ವಿಡಿಯೋ ವೈರಲ್” ಎಂದಿದೆ. Also Read: ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್…
-

Fact Check: ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಯನ್ನು ಸೋಲಿಸುವ ವೀಡಿಯೋ ವೈರಲ್
Claimಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಗಿಂತ ಉತ್ತಮ Factಇಬ್ಬರು ಆಟಗಾರರ ನಡುವಿನ ಟೇಬಲ್ ಟೆನ್ನಿಸ್ ಪಂದ್ದದ ಕ್ಲಿಪ್ ಅನ್ನೇ ಡಿಜಿಟಲ್ ಆಗಿ ಮಾರ್ಪಡಿಸಿ ರೊಬೋಟ್ ಆಡುತ್ತಿದೆ ಎಂಬಂತೆ ಮಾಡಲಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ರೊಬೋಟ್ ಒಂದು ಮಾನವ ಎದುರಾಳಿ ಕ್ರೀಡಾಪಟುವನ್ನು ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಸೋಲಿಸುವ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ರೊಬೋಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ಇದು ಹಲವು ಚರ್ಚೆಗಳನ್ನೂ ಹುಟ್ಟು ಹಾಕಿದೆ. ಈ ಕ್ಲೇಮ್ ಕುರಿತು ಕುರಿತು ಸತ್ಯಶೋಧನೆಯನ್ನು ನಾವು ಮಾಡಿದ್ದು, ಇದೊಂದು ತಿರುಚಲಾದ ವೀಡಿಯೋ ಎಂದು ನಾವು…
-

Fact Check: ಬ್ರೆಜಿಲ್ ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯ ಹಳೆಯ ವೀಡಿಯೋ ಮಣಿಪುರದ್ದು ಎಂದು ತಪ್ಪಾಗಿ ಹಂಚಿಕೆ
Claimಮಣಿಪುರದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ Factವೈರಲ್ ವೀಡಿಯೋ 2020ರದ್ದಾಗಿದ್ದು, ಆಗ ಬ್ರೆಜಿಲ್ನಲ್ಲಿ 23 ವರ್ಷದ ಮಹಿಳೆಯನ್ನು ಕ್ರಿಮಿನಲ್ ಗಳ ಗುಂಪು ಅಪಹರಿಸಿ ಕೊಲೆ ಮಾಡಿತ್ತು ಮಣಿಪುರದಲ್ಲಿ ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಘರ್ಷಣೆಗಳ ಮಧ್ಯೆ ಯುವತಿಯೊಬ್ಬಳನ್ನು ಕಡಿದು ಕೊಲ್ಲುವ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾವು ಈ ವೀಡಿಯೋವನ್ನು ನಾವು ನಮ್ಮ ವಾಟ್ಸಾಪ್ ಟಿಪ್ಲೈನ್ (+91999949904) ನಲ್ಲಿ ಸ್ವೀಕರಿಸಿದ್ದೇವೆ, ಇದನ್ನು ಸತ್ಯಶೋಧನೆ ಮಾಡುವಂತೆ ವಿನಂತಿಸಲಾಗಿತ್ತು. Also Read: ಮಣಿಪುರದಲ್ಲಿ ಮೈತೇಯಿ ಬಾಲಕಿ…
-

Weekly wrap: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿ, ಬಾಲಕಿ ಹತ್ಯೆ, ವಾರದ ಕ್ಲೇಮ್ಗಳ ನೋಟ
ಮಣಿಪುರದ ಕುಕಿ-ಮೈತೇಯಿ ಸಮುದಾಯದ ನಡುವಿನ ಗಲಭೆ ಹೆಚ್ಚು ಹೆಚ್ಚು ಸುದ್ದಿ ಮಾಡಿರುವಂತೆಯೇ, ಈ ವಾರ ಇದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳೇ ಹೆಚ್ಚು ಹರಿದಾಡಿವೆ. ಇದರೊಂದಿಗೆ ಕರಾವಳಿ-ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾದ ಸಂದರ್ಭ ಚಾರ್ಮಾಡಿ ಘಾಟಿಯಲ್ಲಿ ಪ್ರವಾಹದ ನೀರು ಹರಿದಿದೆ ಎಂದು ಸುದ್ದಿಯಾಗಿತ್ತು. ಆರೋಗ್ಯ ಸಂಬಂಧಿ ಇನ್ನೊಂದು ಕ್ಲೇಮ್ನಲ್ಲಿ ಈರುಳ್ಳಿ ತಿಂದರೆ, ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತಿದೆ ಎಂದು ಸಂದೇಶ ಹರಿದಾಡಿತ್ತು. ಈ ಹೇಳಿಕೆಗಳನ್ನು ನ್ಯೂಸ್ಚೆಕರ್ ಸತ್ಯಶೋಧನೆಗೊಳಪಡಿಸಿದ್ದು, ಅವುಗಳು ಸುಳ್ಳು ಎಂದು ಕಂಡುಬಂದಿದೆ. ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿದ್ದ…
-

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ
Claimಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ Factಇದು ಮಣಿಪುರದಲ್ಲಿ ನಡೆದ ಘಟನೆಯ ವೀಡಿಯೋ ಅಲ್ಲ, 2022ರಲ್ಲಿ ಮ್ಯಾನ್ಮಾರ್ ನಲ್ಲಿ ಬಂಡುಕೋರ ಪಡೆಗಳು, ಮಿಲಿಟರಿಯ ಮಾಹಿತಿದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಹತ್ಯೆಗೈದ ಘಟನೆಯಾಗಿದೆ. ಮಣಿಪುರದಲ್ಲಿ ಗಲಭೆ ಅವ್ಯಾಹತವಾಗಿ ನಡೆದಿರುವಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಹೇಳಿಕೆಗಳೂ ನಿರಂತರವಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮೈತೇಯಿ ಜನಾಂಗದ ಬಾಲಕಿಯೊಬ್ಬಳನ್ನು ಥಳಿಸಿ ಹತ್ಯೆ ಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಾಟ್ಸಾಪ್ನಲ್ಲಿ ಕಂಡುಬಂದ ಸಂದೇಶದಲ್ಲಿ “ಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಹಿಂದೂ…
-

Fact Check: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿದ್ದ ಫೋಟೋ ನಿಜವೇ?
Claimಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿFactಕುಕಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಆರೋಪಿಗಳು ಇವರಲ್ಲ. ಇವರು ಮಣಿಪುರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ. ಈ ಸುಳ್ಳು ಸುದ್ದಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಆರೆಸ್ಸೆಸ್ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪುರುಷರ ಗುಂಪಿನಲ್ಲಿ ಇವರಿಬ್ಬರು ಸೇರಿದ್ದಾರೆ ಎಂದು ಹಲವರು ಹೇಳಿದ್ದಾರೆ.…