Ishwarachandra B G

  • ಸೌದಿ ದೊರೆ ಜೈ ಶ್ರೀ ರಾಮ್‌ ಘೋಷಣೆ ಮೊಳಗಿಸಿದರೇ?

    ಸೌದಿ ದೊರೆ ಜೈ ಶ್ರೀ ರಾಮ್‌ ಘೋಷಣೆ ಮೊಳಗಿಸಿದರೇ?

    ಸೌದಿ ದೊರೆಯ ಬಾಯಲ್ಲಿ ಜೈ ಶ್ರೀ ರಾಮ್‌ ಘೋಷಣೆ ಎಂಬ ರೀತಿ ವೈರಲ್‌ ವೀಡಿಯೋವೊಂದು ಫೇಸ್‌ಬುಕ್‌,ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡುತ್ತಿದೆ.“ಸೌದಿ ದೊರೆಯ ಬಾಯಲ್ಲಿ ಜೈ ಶ್ರೀ ರಾಮ್‌ ಘೋಷಣೆ ಇದು ಮೋದೀಜೀಯ ತಾಕತ್ತು; ಜೈ ಶ್ರೀರಾಮ” ಎಂದು ಕ್ಲೇಮಿನಲ್ಲಿ ಹೇಳಲಾಗಿದೆ. Fact Check ವೀಡಿಯೋದ ಅಸಲಿಯತ್ತು ಪರೀಕ್ಷೆಗೆ ಮೊದಲು ವೀಡಿಯೋವನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಾಗಿದೆ. ಇದಕ್ಕಾಗಿ ಗೂಗಲ್‌ನಲ್ಲಿ ಕೀವರ್ಡ್ ಸರ್ಚ್‌ ನಡೆಸಿದಾಗ ಈ ಕಾರ್ಯಕ್ರಮದ್ದು ಎನ್ನಲಾದ ಯೂಟ್ಯೂಬ್‌ ವೀಡಿಯೋ ಲಭ್ಯವಾಗಿದ್ದು ಸುವೇಂದು ಅಧಿಕಾರಿ ಲೈವ್  ಎಂಬ ಚಾನೆಲ್‌ನಲ್ಲಿ ಈ ವೀಡಿಯೋ…

  • ಭಾರತ-ಚೀನ ಸೈನಿಕರ ಮುಖಾಮುಖಿಯ ಹಳೆಯ ವೀಡಿಯೋ ತೋರಿಸಿ ಇತ್ತೀಚಿನದ್ದು ಎಂದು ಪ್ರಚಾರ

    ಭಾರತ-ಚೀನ ಸೈನಿಕರ ಮುಖಾಮುಖಿಯ ಹಳೆಯ ವೀಡಿಯೋ ತೋರಿಸಿ ಇತ್ತೀಚಿನದ್ದು ಎಂದು ಪ್ರಚಾರ

    ತವಾಂಗ್‌ನಲ್ಲಿ ಇತ್ತೀಚಿಗೆ, ಭಾರತ-ಚೀನ ಸೈನಿಕರ ಕಾದಾಟದ ಸುದ್ದಿ ಹಬ್ಬಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸೈನಿಕರ ಪರಾಕ್ರಮವನ್ನ ಅಭಿನಂದಿಸಿ ಅನೇಕ ವೀಡಿಯೋಗಳು ವೈರಲ್‌ ಆಗುತ್ತಿವೆ. ಹಲವು ಬಳಕೆದಾರರು ವೀಡಿಯೋಗಳನ್ನು ಶೇರ್‌ ಮಾಡಿದ್ದು, ಇದನ್ನು 9ರಂದು ಅರುಣಾಚಲದ ತವಾಂಗ್‌ನಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ.  ಅಂತಹ ವೀಡಿಯೋಗಳಲ್ಲಿ ಒಂದನೆಯದು ಸೈನಿಕರ ಗುಂಪು ದೈಹಿಕವಾಗಿ ಕಾದಾಟಕ್ಕೆ ಇಳಿದಿರುವುದು ಮತ್ತು ಇನ್ನೊಂದರಲ್ಲಿ ಸೇನಾ ವಾಹನವೊಂದನ್ನು ಪುಡಿಗಟ್ಟುತ್ತಿರುವ ವೀಡಿಯೋ ಇದೆ. ಈ ಎರಡೂ ವೀಡಿಯೋಗಳು ಹಳೆಯ ವೀಡಿಯೋಗಳಾಗಿದ್ದು ಮೊನ್ನೆ ವರದಿಯಾದ ತವಾಂಗ್‌ನದ್ದಲ್ಲ ಎನ್ನುವುದನ್ನು…

  • ತವಾಂಗ್‌ ಕಾದಾಟದ ಬಳಿಕ 2021ರ ವರದಿಯ ವೀಡಿಯೋ ವೈರಲ್‌ ಆಯಿತೇ? ಇಲ್ಲಅದು ಎಡಿಟ್‌ ಮಾಡಲಾದ ವೈರಲ್‌ ಸ್ಕ್ರೀನ್‌ಗ್ರ್ಯಾಬ್‌

    ತವಾಂಗ್‌ ಕಾದಾಟದ ಬಳಿಕ 2021ರ ವರದಿಯ ವೀಡಿಯೋ ವೈರಲ್‌ ಆಯಿತೇ? ಇಲ್ಲಅದು ಎಡಿಟ್‌ ಮಾಡಲಾದ ವೈರಲ್‌ ಸ್ಕ್ರೀನ್‌ಗ್ರ್ಯಾಬ್‌

    ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಿ ಸೇನೆ ಭಾರತೀಯ ಸೇನೆಯೊಂದಿಗೆ ಕಾದಾಟ ನಡೆದ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಇಲ್ಲೊಂದು ಕಡೆ 2021ರ ವರದಿಯ ವೀಡಿಯೋಕ್ಕೆ ವೈರಲ್‌ ಸ್ಕ್ರೀನ್‌ ಗ್ರ್ಯಾಬ್‌ ಬಳಸಿ ಎಡಿಟ್‌ ಮಾಡಿರುವುದು ಗೊತ್ತಾಗಿದೆ. Fact Check ವೀಡಿಯೋದ ಸ್ಕ್ರೀನ್‌ಗ್ರ್ಯಾಬ್‌ ಪರಿಶೀಲಿಸಿದಾಗ, ಎನ್ ಬಿಸಿ ನ್ಯೂಸ್‌ನ ಲೋಗೋ ಎಡಬದಿ ಮೇಲ್ಭಾಗದಲ್ಲಿದೆ. ಮತ್ತು ಈ ವರದಿಯು 2021 ಫೆಬ್ರವರಿ 19ರಂದು ಅಪ್ಡೇಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರ ಶೀರ್ಷಿಕೆಯಲ್ಲಿ “ಚೀನ ಸರ್ಕಾರಿ ಸ್ವಾಮ್ಯದ ಚಾನೆಲ್‌ ಭೀಕರ ವೀಡಿಯೋ…”ಎಂದಿದೆ.  ಈ ಕುರಿತು…

  • ಪೆಟ್ರೋಲ್‌ ಪಂಪ್‌ನಲ್ಲಿ ಕೊಟ್ಟ ಕೀಚೈನಿಂದ ದರೋಡೆ? ವೈರಲ್‌ ಮೆಸೇಜ್‌ ಸತ್ಯವೇ

    ಪೆಟ್ರೋಲ್‌ ಪಂಪ್‌ನಲ್ಲಿ ಕೊಟ್ಟ ಕೀಚೈನಿಂದ ದರೋಡೆ? ವೈರಲ್‌ ಮೆಸೇಜ್‌ ಸತ್ಯವೇ

    ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಇದೀಗ ವಾಟ್ಸಾಪ್‌ ಮೆಸೇಜ್‌ ಒಂದು ವೈರಲ್‌ ಆಗಿದೆ. ಈ ಮೆಸೇಜ್‌ ಪ್ರಕಾರ “ಎಚ್ಚರಿಕೆ, ಈ ಕೀ ಚೈನ್‌ ಅನ್ನು ನಿಮಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಮತ್ತು ಶಾಪಿಂಗ್‌ ಮಾಲ್‌ಗಳಲ್ಲಿ ಉಚಿತವಾಗಿ ಕೊಡಲಾಗುತ್ತದೆ. ಆದರೆ ಇದನ್ನು ತೆಗೆದುಕೊಳ್ಳಬೇಡಿ. ಇದನ್ನು ಟ್ರ್ಯಾಕ್‌ ಮಾಡಲು ಬಳಸಲಾಗುತ್ತಿದ್ದು, ನಿಮ್ಮ ಮನೆಗಳಲ್ಲಿ ನಿಮ್ಮನ್ನು ದರೋಡೆ ಮಾಡಬಹುದುದು. ಸಂದೇಶವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ” ಎಂದಿದೆ. ಈ ಸಂದೇಶವನ್ನು ಬಳಕೆದಾರರೊಬ್ಬರು ನ್ಯೂಸ್‌ಚೆಕರ್‌ ಜೊತೆ ಹಂಚಿಕೊಂಡಿದ್ದು ಸತ್ಯಶೋಧನೆಗೆ ಮನವಿ ಮಾಡಿದ್ದಾರೆ. Fact…

  • ಕಾಂತಾರ ಸಿನೆಮಾ ನೋಡಲು ಹೋದ ಜೋಡಿಗೆ ಹಲ್ಲೆ ನಡೆಸಿದ್ದಕ್ಕೆ ಇಸ್ಲಾಮೋಫೋಬಿಯಾ ಕಾರಣ?

    ಕಾಂತಾರ ಸಿನೆಮಾ ನೋಡಲು ಹೋದ ಜೋಡಿಗೆ ಹಲ್ಲೆ ನಡೆಸಿದ್ದಕ್ಕೆ ಇಸ್ಲಾಮೋಫೋಬಿಯಾ ಕಾರಣ?

    ಕಾಂತಾರ ಸಿನೆಮಾ ನೋಡಲು ಹೋದ ಮುಸ್ಲಿಂ ಜೋಡಿಗೆ, ಗುಂಪೊಂದು ಹಲ್ಲೆ ನಡೆಸಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಈ ಸುದ್ದಿಯನ್ನು ಹಲವರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ “ಮುಸ್ಲಿಂ ಜೋಡಿ ಕನ್ನಡ ಸಿನೆಮಾ ಕಾಂತಾರ ನೋಡಲು ಹೋಗಿದ್ದು, ಅವರ ಮೇಲೆ ಗುಂಪೊಂದು ಹಲ್ಲೆ ಮಾಡಿದೆ” ಎಂದು ಹೇಳಿದ್ದಾರೆ’’. ಜೊತೆಗೆ ಇಸ್ಲಾಮೋಫೋಬಿಯಾ ಇನ್‌ ಇಂಡಿಯಾ, ಹಿಂದುತ್ವ, ಹಿಂದೂಸ್‌4ಎಚ್ಆರ್‌, ಐಆಮ್‌ಕೌನ್ಸಿಲ್‌, ಬಿಜೆಪಿ, ಬಿಜೆಪಿಫೈಲ್ಸ್‌ಇನ್‌ಇಂಡಿಯಾ ಹೆಸರಿನಲ್ಲಿ ಹ್ಯಾಷ್‌ಟ್ಯಾಗ್‌ ಹಾಕಲಾಗಿದೆ. ಅದು ಇಲ್ಲಿದೆ. Fact Check…

  • ಶಬರಿಮಲೆಗೆ ಮೋದಿ ಭೇಟಿ ನೀಡಿದ್ದು ನಿಜವೇ? 
  • ಮೂಡಿಗೆರೆಯ ಚಹಾ ಅಂಗಡಿ ಮಾಲೀಕ ಸೆರೆ ಹಿಡಿದ ದೆವ್ವದ ವೈರಲ್‌ ವೀಡಿಯೋ ನಿಜವೇ? 
  • ಪ.ಬಂಗಾಳ ಚುನಾವಣೆ ಅಕ್ರಮ ಗುಜರಾತ್ ಗೆ ಲಿಂಕ್‌, ವೀಡಿಯೋ ವೈರಲ್‌ 

    ಪ.ಬಂಗಾಳ ಚುನಾವಣೆ ಅಕ್ರಮ ಗುಜರಾತ್ ಗೆ ಲಿಂಕ್‌, ವೀಡಿಯೋ ವೈರಲ್‌ 

    ಮತಗಟ್ಟೆಯಲ್ಲಿ ಮತದಾನ ಅಕ್ರಮ ನಡೆಸಲಾಗುತ್ತಿದೆ ಎನ್ನುವುದನ್ನು ವೀಡಿಯೋವೊಂದು ವೈರಲ್‌ ಆಗಿದ್ದು ವಾಟ್ಸಾಪ್‌ ನಲ್ಲಿ ಹರಿದಾಡುತ್ತಿದೆ. ಇದು ಗುಜರಾತ್‌ ಚುನಾವಣೆಯದ್ದು ಎಂದು ಹಲವರು ಹೇಳಿದ್ದಾರೆ. ಈ ಕ್ಲೇಮ್‌ ಪ್ರಕಾರ “ಗುಜರಾತ್‌ನ ಎಲ್ಲ ಮತಗಟ್ಟೆಗಳಲ್ಲಿ ಬಿಜೆಪಿ ಮತ್ತು ಮತಗಟ್ಟೆ ಸಿಬ್ಬಂದಿಗಳ ಸಹಕಾರದೊಂದಿಗೆ ಒಬ್ಬ ವ್ಯಕ್ತಿ ಬಿಜೆಪಿ ಪರವಾಗಿ ನಿರಂತರವಾಗಿ ಇವಿಎಂನ ಬಟನ್‌ ಅನ್ನು ಒತ್ತುತ್ತಲೇ ಇದ್ದನು. ಮತದಾರಿಗೆ ಇವಿಎಂ ಬಟನ್‌ ಒತ್ತಲು ಅವಕಾಶ ನೀಡಲಿಲ್ಲ. ಮೋದಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ವೀಡಿಯೋದಲ್ಲಿ ನೋಡಿ” ಎಂದು…

  • ಬ್ರಾಹ್ಮಣರನ್ನು ನಿಂದಿಸಿದವರ ವಿರುದ್ಧ ದೌರ್ಜನ್ಯ ಕಾಯ್ದೆ? ಇಲ್ಲ, ಈ ವೈರಲ್‌ ಪೋಸ್ಟ್‌ ಸುಳ್ಳು!

    ಬ್ರಾಹ್ಮಣರನ್ನು ನಿಂದಿಸಿದವರ ವಿರುದ್ಧ ದೌರ್ಜನ್ಯ ಕಾಯ್ದೆ? ಇಲ್ಲ, ಈ ವೈರಲ್‌ ಪೋಸ್ಟ್‌ ಸುಳ್ಳು!

    ಬ್ರಾಹ್ಮಣ ಸಮುದಾಯದವರನ್ನು ಅವಾಚ್ಯವಾಗಿ ನಿಂದಿಸುವವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಆದರೆ ಅಂತಹ ಯಾವುದೇ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿಲ್ಲ ಮತ್ತು ಈ ವೈರಲ್‌ ಪೋಸ್ಟ್‌ ಸುಳ್ಳಾಗಿದೆ ಎಂಬುದನ್ನು ನ್ಯೂಸ್‌ಚೆಕರ್‌ ಕಂಡುಹಿಡಿದಿದೆ. ಈ ಪೋಸ್ಟ್‌ನಲ್ಲಿ “ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವ ತೀರ್ಪು ನೀಡಿದೆ. ಬ್ರಾಹ್ಮಣ ಜಾತಿಗೆ ನಿಂದನೀಯ ಪದಗಳನ್ನು ಮಾತನಾಡಲು ದೌರ್ಜನ್ಯ ಕಾಯ್ದೆ ಅನ್ವಯಿಸುತ್ತದೆ.…

  • ವೈರಲ್‌ ವೀಡಿಯೋದಲ್ಲಿ ಹಿಂದೂ ಭಜನೆ ಹಾಡುತ್ತಿರುವ ಯುವತಿ ಗಾಯಕ ಮಹಮ್ಮದ್‌ ರಫಿ ಮೊಮ್ಮಗಳಲ್ಲ

    ವೈರಲ್‌ ವೀಡಿಯೋದಲ್ಲಿ ಹಿಂದೂ ಭಜನೆ ಹಾಡುತ್ತಿರುವ ಯುವತಿ ಗಾಯಕ ಮಹಮ್ಮದ್‌ ರಫಿ ಮೊಮ್ಮಗಳಲ್ಲ

    ಯುವತಿಯೊಬ್ಬರು ಹಿಂದೂ ಭಜನೆ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕೆಲವರು ಇವರನ್ನು ಗಾಯಕ ಮಹಮ್ಮದ್‌ ರಫಿ ಮೊಮ್ಮಗಳು ಎಂದು ಹೇಳಲಾಗಿದೆ.